ಗಣೇಶೋತ್ಸವ ಕಾರ್ಯಕ್ರಮ -2024
60 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಕಳೆದ ಮೂರು ವರ್ಷಗಳಿಂದ ಭಾರತೀ ಕಲಾಕೇಂದ್ರದ ವಿದ್ಯಾರ್ಥಿಗಳು ಕಲಾಪ್ರದರ್ಶನ ಮಾಡುತ್ತಿದ್ದಾರೆ. ಅಂತೆ ಇಂದು ದಿನಾಂಕ 12.09.2024 ರಂದು ಭಾರತೀಯ ಕಲಾಕೇಂದ್ರದ ವಿದ್ಯಾರ್ಥಿಗಳು ನುರಿತ ಶಿಕ್ಷಕರಿಂದ ತರಬೇತಿ ಪಡೆದು ಕಲಾಪ್ರದರ್ಶನ ಮಾಡಿದರು. ಸಂಗೀತ ಹಾಗೂ ಭರತನಾಟ್ಯ ಪ್ರದರ್ಶನಗಳನ್ನು ನಡೆಸಿಕೊಟ್ಟರು.
ಅದರ ಪೂರ್ವಭಾವಿಯಾಗಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀ ಕಲಾಕೇಂದ್ರದ ಸಂಚಾಲಕರಾದ ಶ್ರೀ ಡಿ.ಸಿ.ಭಟ್ಟ ರವರು ವಹಿಸಿದ್ದು, ವಸತಿ ನಿಲಯದ ಸಂಚಾಲಕರಾದ ಶ್ರೀ ಐ.ಪಿ. ಭಟ್ಟ ಪ್ರಗತಿ ಪಿಯು ಕಾಲೇಜಿನ ಪ್ರಾಚಾರ್ಯರಾದ ಶ್ರೀ ಜಿ ಎಂ ಭಟ್ಟ ಶ್ರೀಧರ ಸಂಸ್ಕೃತ ಪಾಠ ಶಾಲೆಯ ಮುಖ್ಯ ಗುರುಗಳಾದ ವಿದ್ವಾನ್ ಶ್ರೀ ಶ್ರೀಪಾದ ಭಟ್ಟ ಕನ್ನಡ ಮಾಧ್ಯಮ ಪ್ರೌಢಶಾಲೆ ಪ್ರಭಾರಿ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಗಾಯತ್ರಿ ಭಟ್ಟ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀ ವಿವೇಕ ಆಚಾರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಪ್ರಭಾರಿ ಮುಖ್ಯ ಶಿಕ್ಷಕಿಯಾದ ಶ್ರೀಮತಿ ನಯನ ಹಬ್ಬು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಾರತಿ ಕಲಾಕೇಂದ್ರದ ಸದಸ್ಯರಾದ ಶ್ರೀ ಜಿ.ವಿ ಹೆಗಡೆ ಪ್ರಥಮ ಪೂಜಿತಿನನ್ನು ವಕ್ರತುಂಡ ಮಹಾಕಾಯ ಎಂದು ಪ್ರಾರಂಭಿಸುತ್ತಲೇ ಪೂಜಿಸುತ್ತೇವೆ.ಆತನಲ್ಲಿರುವ ವಕ್ರವನ್ನು ಗಮನಿಸದೆ ಬುದ್ಧಿಗೆ ಪ್ರಾಮುಖ್ಯ ಕೊಡುವಂತೆ ಮಾನವನಲ್ಲೂ ಬುದ್ಧಿಗೆ ಮಹತ್ವ ಕೊಡಬೇಕು ಎಂದರು. ಉಪನ್ಯಾಸಕಿ ಮೇಧಾ ಗುಣಿ ಎಲ್ಲರನ್ನು ಸ್ವಾಗತಿಸಿದರು. ಉಪನ್ಯಾಸಕಿ ಪವಿತ್ರ ಹೆಗಡೆ ಆಭಾರ ಮನ್ನಣೆ ನಡೆಸಿಕೊಟ್ಟರು.