ಶಿಕ್ಷಕ ರಾಷ್ಟ್ರ ರಕ್ಷಕ -05-09-2024

ಶಿಕ್ಷಕ ರಾಷ್ಟ್ರ ರಕ್ಷಕ ಎಂಬ ಶೀರ್ಷಿಕೆ ಅಡಿಯಲ್ಲಿ ಕಳೆದ ಮೂರು ವರ್ಷಗಳಿಂದ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮಾಡಲಾಗುತ್ತಿದ್ದು, ಈ ವರ್ಷವೂ ಸಹ ಪ್ರಗತಿ ವಿದ್ಯಾಲಯ ಸಮೂಹ ಶಾಲೆಗಳ ವತಿಯಿಂದ ದಿನಾಂಕ: 05.09.2024 ರಂದು ನಿವೃತ್ತ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು. ಪ್ರಗತಿ ವಿದ್ಯಾಲಯ ಕನ್ನಡ ಮಾಧ್ಯಮ ಪ್ರೌಢಶಾಲೆಯ ಶಿಕ್ಷಕರಾಗಿ ನಿವೃತ್ತರಾದ ಶ್ರೀ ಎಸ್. ಕೆ. ಭಟ್ಟ, ತೊಂಡೆಕೆರೆ, ಪ್ರಗತಿ ವಿದ್ಯಾಲಯ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ನಿವೃತರಾದ ಇನ್ನೋರ್ವ ಶಿಕ್ಷಕರು ಶ್ರೀ ವಿ ಆರ್ ಭಟ್ಟ ಮೇಲಿನ ದೇವಳ್ಳಿ ಯವರಿಗೆ ಹಾಗೂ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಮತಿ ಗಿರಿಜಾ ಹೆಗಡೆ ಮುಡಾರೆ ಇವರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಆರ್. ಜಿ. ಭಟ್ಟ ರವರು ವಹಿಸಿದ್ದರು. ಪ್ರಾಂಶುಪಾಲರಾದ ಶ್ರೀ ಗಜಾನನ ಭಟ್ಟ ರವರು ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಯನ್ನಾಡಿದರು. ಶಿಕ್ಷಣ ವಿಭಾಗದ ಸಂಚಾಲಕರಾದ ಶ್ರೀ ಟಿ ಆರ್ ಜೋಶಿ ಕಾರ್ಯದರ್ಶಿಗಳಾದ ಶ್ರೀ ಟಿ ಎಸ್ ಭಟ್ಟ ಆಡಳಿತಾಧಿಕಾರಿಗಳು ಪ್ರಗತಿ ಪಿಯು ಕಾಲೇಜಿನ ಪ್ರಾಚಾರ್ಯರು ಆದ ಶ್ರೀ ಜಿ ಎಂ ಭಟ್ಟರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸನ್ಮಾನಿತರು ಗುರುವಿನ ಮೂಲ ಮತ್ತು ಮಹತ್ವದ ಕುರಿತು ಮಕ್ಕಳ ಮನಮುಟ್ಟುವಂತೆ ಬೆಳೆಸಿದರು. ಗುರು, ಬ್ರಹ್ಮ, ಪರಬ್ರಹ್ಮ, ಪರಾತ್ಪರ ಬ್ರಹ್ಮ, ವೇದವ್ಯಾಸ ಹೀಗೆ ಋಷಿ ಮೂಲದಿಂದ ಗುರು ಪರಂಪರೆ ಪ್ರಾರಂಭದ ಕುರಿತು ತಿಳಿ ಹೇಳಿದರು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ವಿವೇಕ ಆಚಾರಿಯವರು ವಂದಿಸಿದರು.

You may also like...